ಎಡಪಕ್ಷಗಳನ್ನು ಹೊರತು ಪಡಿಸಿ, ಕಾರ್ಮಿಕರನ್ನು ಕ ಡೆಗಣಿಸಿದ ರಾಜಕೀಯ ಪಕ್ಷಗಳು!

ಚುನಾವಣಾ ಪ್ರಣಾಳಿಕೆಗಳಲ್ಲಿ ಕಾರ್ಮಿಕರ ಬಗ್ಗೆ ಉಲ್ಲೇಖವೇ ಇಲ್ಲ!

ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗೆ ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿವೆ. ಆದರೇ, ಈ ಯಾವ ಪಕ್ಷಗಳೂ ಕಾರ್ಮಿಕರ ಬಗ್ಗೆ ಯಾವುದೇ ವಿಚಾರವನ್ನೂ ವ್ಯಕ್ತಪಡಿಸಿಲ್ಲ. ಕನಿಷ್ಠ ವೇತನ – ಸೇವಾ ಭದ್ರತೆಯ ಬಗ್ಗಯೂ ಯಾವುದೇ ಪಕ್ಷ ತುಟಿ ಬಿಚ್ಚ್ಇಲ್ಲ. ದಿನೇ ದಿನೇ ಏರುತ್ತಿರುವ ಬೆಲೆಯಿಂದ ಕಾರ್ಮಿಕ ವರ್ಗ ತತ್ತರಿಸುತ್ತಿರುವ ಬಗ್ಗೆಯೂ ಯಾವ ಪಕ್ಷಕ್ಕೂ ಯೋಚಿಸುವ ಸಮಯವೇ ಇಲ್ಲ! ಸಿಪಿಐ(ಎಂ) – ಸಿಪಿಐ ಪಕ್ಷಗಳು ಮಾತ್ರ ಇದಕ್ಕೆ ಹೊರತಾದವುಗಳು. ಅವು ಅಧಿಕಾರ ನಡೆಸುವುದು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಕಾರ್ಮಿಕರ ಬಗ್ಗೆ ಮಾತಾಡದ ಪಕ್ಷಗಳ ಬಗ್ಗೆ ಕಾರ್ಮಿಕ ವರ್ಗ ಯೋಚಿಸಬೇಕಿದೆ. ಗುತ್ತಿಗೆ ಪದ್ಧತಿಯನ್ನು ಕೈ ಬಿಡುವುದರ ಬಗ್ಗೆ ಯೋಚಿಸದೇ, ತ್ರಿಶಂಕು ಸ್ಥಿತಿಯಲ್ಲಿರುವ ಕಾರ್ಮಿಕರ ನೆರವಿಗೆ ಇನ್ನಾದರೂ ರಾಜಕೀಯ ಪಕ್ಷಗಳು ಯೋಚಿಸುವ ಸಮಯ ಇನ್ನೂ ಇದೆ. ಹಾಗಾಗಲಿ.

ನಿಮ್ಮ ಟಿಪ್ಪಣಿ ಬರೆಯಿರಿ