ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-1

ನಿಲುಮೆ

ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

Social Science Column Logo

ಭ್ರಷ್ಟಾಚಾರದ ನಿಗ್ರಹಕ್ಕೆ (ಲೋಕಪಾಲದಂತಹ) ಸಾರ್ವಭೌಮ ಕಾನೂನು/ಸಂಸ್ಥೆಗಳೇ ಪರಿಹಾರ ಎಂಬ ಸಾಮಾನ್ಯ ಗ್ರಹಿಕೆ ಇದೆ. ಇಂದು ಭ್ರಷ್ಟಾಚಾರ ಯಾವ ಸ್ವರೂಪದಲ್ಲಿದೆಯೋ ಮತ್ತು ಅದು ಎಷ್ಟರಮಟ್ಟಿಗೆ ವಿರಾಟ ಸ್ವರೂಪವನ್ನು ಪಡೆದಿದೆಯೋ ಅದಕ್ಕೆ ಈ ರೀತಿಯ ಸಾರ್ವಭೌಮ ಸಂಸ್ಥೆಗಳೇ ಕಾರಣವಾಗಿರುವ ಸಾಧ್ಯತೆಯ ಕುರಿತು ಯಾರೂ ಯೋಚಿಸಿದಂತಿಲ್ಲ. ಅಂದರೆ, ಓರ್ವ ಅಧಿಕಾರಿ ಅಥವಾ ರಾಜಕಾರಣಿ ಕೋಟಿಗಟ್ಟಲೆ ಸಂಪತ್ತನ್ನು ವಾಮಮಾರ್ಗದಲ್ಲಿ ಪಡೆಯಲು ಅವಕಾಶ ಹೇಗೆ ದೊರೆಯುತ್ತದೆ? ಕಾರ್ಪೋರೇಟ್ ಸೆಕ್ಟಾರ್ಗಳ ಲಾಭಿ ಎಂದು ಅಣ್ಣಾ ಹಜಾರೆಯವರ ಹೋರಾಟವನ್ನು ಟೀಕಿಸಿ ಅರುಂಧತಿ ರಾಯ್ರವರು ನೀಡುವ ವಿವರಣೆಗಳನ್ನೇ ಆಳವಾಗಿ ವಿಶ್ಲೇಷಿಸಿದರೆ ಇದಕ್ಕೆ ಭಾಗಶಃ ಉತ್ತರ ದೊರೆಯುತ್ತದೆ. ಒಂದು ಕಾರ್ಪೋರೇಟ್ ಸಂಸ್ಥೆ ಕೈಗಾರಿಕೆ ಸ್ಥಾಪಿಸಲು ಮುಂದೆ ಬಂತು ಎಂದರೆ ಅದಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಸರ್ಕಾರವು ಒದಗಿಸಿಕೊಡಬೇಕು ಎಂಬುದು ಸರ್ಕಾರದ್ದೇ ನಿಯಮವಾಗಿದೆ. ಉದಾಹರಣೆಗೆ ಟಾಟಾದ ನ್ಯಾನೋ ಕಾರಿನ ಉಧ್ಯಮಕ್ಕೆ ಪಶ್ಚಿಮ ಬೆಂಗಾಲದ ಸರ್ಕಾರ ಸಿಂಗೂರಿನಲ್ಲಿ 997 ಎಕರೆ ಭೂಮಿಯನ್ನು 90 ವರ್ಷಗಳಿಗೆ ಗುತ್ತಿಗೆ ನೀಡಿತು. ಗುತ್ತಿಗೆ ಹಣವನ್ನು ಮೊದಲ 60ವರ್ಷಗಳು ಮುಗಿದ ಮೇಲೆ ಉಳಿದ 30 ವರ್ಷಗಳಲ್ಲಿ ವಾರ್ಷಿಕ ಕಂತಿನ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕು. ಅಲ್ಲಿಯವರೆಗೂ ಆ ಭೂಮಿಯು ಆ ಕಂಪೆನಿಗೆ ಉಚಿತವಾದ ‘ಉಡುಗೊರೆ’ಯಾಗಿರುತ್ತದೆ. ಈ ಭೂಮಿಯಲ್ಲಿ ಶೇ 45ರಷ್ಟು ಭೂಮಿಯನ್ನು ಬಲವಂತವಾಗಿ ಸರ್ಕಾರ ರೈತರನ್ನು ತೆರವುಗೊಳಿಸಿ ಕೊಟ್ಟಿರುವುದನ್ನು ಸರ್ಕಾರವೇ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಇದರ ಜೊತೆಗೆ ರಸ್ತೆ, ನೀರಿನ ಸೌಲಭ್ಯಗಳನ್ನು ಉಚಿತವಾಗಿ ನೀಡಿ ರಿಯಾಯಿತಿ ದರದಲ್ಲಿ ನಿರಂತರ ವಿದ್ಯುತ್ ನೀಡಬೇಕು. ಇಷ್ಟನ್ನು ಒಂದು ಖಾಸಗಿ…

View original post 600 more words

ನಿಮ್ಮ ಟಿಪ್ಪಣಿ ಬರೆಯಿರಿ